?ದೇವ್ ಸನ್ ಆಫ಼್ ಮುದ್ದೇಗೌಡ ತೆರೆಗೆ ಬರಲು ಸಿದ್ದ
Posted date: 02 Mon, Apr 2012 ? 08:53:58 AM

 ಜೆಡ್ ಪ್ಲಾಂಟ್ಸ್ ವೆಂಚರ್ ಸಂಸ್ಥೆ ಲಾಂಛನದಲ್ಲಿ ಶಿಲ್ಪಾರಮೇಶ್‌ರಮಣಿ ಅವರು ನಿರ್ಮಿಸಿರುವ ‘ದೇವ್ ಸನ್ ಆಫ಼್ ಮುದ್ದೇಗೌಡ’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
   ದಿಗಂತ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ಬೆಡಗಿ ಚಾರ್ಮಿ. ಅನಂತನಾಗ್, ಶರಣ್, ಸುಧಾಬೆಳವಾಡಿ, ರಾಜುತಾಳಿಕೋಟೆ, ಮತಾಲಿಯಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.
   ಇಂದ್ರಜಿತ್ ಲಂಕೇಶ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಜೆಸ್ಸಿಗಿಫ಼್ಟ್ ಸಂಗೀತ ನೀಡಿದ್ದಾರೆ. ಸಂತೋಷ್  ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಕವಿರಾಜ್ ಗೀತರಚನೆ ಹಾಗೂ ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಮತ್ತು ಮಂಜು ಮಾಂಡವ್ಯ  ಸಂಭಾಷಣೆ ಬರೆದಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed